
ದೇಶಕ್ಕೆ ಸುಭದ್ರ ಆಡಳಿತ ಕೊಟ್ಟ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭ್ರಷ್ಟಾಚಾರ ರಹಿತ ಆಡಳಿತ ಕೊಟ್ಟಿರುವ ಕೀರ್ತಿ ಸಲ್ಲುತ್ತದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.ಪಟ್ಟಣದ ಬಿಜೆಪಿ ಕಚೇರಿಯಲ್ಲಿ ವಿಕಸಿತ ಭಾರತ ಅಮೃತಕಾಲ ಸೇವೆ, ಸುಶಾಸನ, ಮೋದಿ ಸರ್ಕಾರಕ್ಕೆ 11 ವರ್ಷ ಪೂರೈಸಿದ ಹಿನ್ನಲೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನರೇಂದ್ರ ಮೋದಿ ಪ್ರಧಾನಿಯಾದ ನಂತರ ದೇಶದಲ್ಲಿ ಗುಂಡಿನ ದಾಳಿ, ಬಾಂಬ್ ದಾಳಿ ಕಡಿಮೆಯಾಗಿವೆ.ಇತ್ತೀಚಿಗೆ ನಡೆದ ಆಪರೇಷನ್ ಸಿಂದೂರ ಕಾರ್ಯಾಚರಣೆಯಲ್ಲಿ ನರೇಂದ್ರ ಮೋದಿ ಅವರು ಸೈನಿಕರಿಗೆ ಬಲ ತುಂಬುವ ಮೂಲಕ ಭಾರತೀಯರ ಮೇಲೆ ದಾಳಿ ಮಾಡಿದ ಉಗ್ರರರನ್ನು ಸದೆ ಬಡೆಯುವ ಕೆಲಸ ಮಾಡುವ ನಿಟ್ಟಿನಲ್ಲಿ ಭಾರತವೂ ಪಾಕಿಸ್ತಾನದ ಉಗ್ರರ ತಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿ ಜಗತ್ತಿಗೆ ಮಾದರಿ ದೇಶವಾಗಿದೆ. ಇಂದು ಆರ್ಥಿಕ ಸ್ಥಿತಿಯಲ್ಲಿ ಭಾರತ 4ನೇ ಸ್ಥಾನದಲ್ಲಿದ್ದು 3ನೇ ಸ್ಥಾನಕ್ಕೆ ಬರಲಿದೆ.ಜಿಲ್ಲಾ ಬಿಜೆಪಿ ಸಂಚಾಲಕ ಶ್ರೀಧರ ಕೆಸರಟ್ಟಿ ಭಾರತವೂ ಪಾಕಿಸ್ತಾನದ ಉಗ್ರರ ತಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿ ಜಗತ್ತಿಗೆ ಮಾದರಿ ದೇಶವಾಗಿದೆ ಎಂದು ಹೇಳಿದರು.ದೊಡ್ಡನಗೌಡ ಪಾಟೀಲ ಶಾಸಕ ಮಾತನಾಡಿ, ದೇಶದಲ್ಲಿ ಉತ್ತಮ ಆಡಳಿತ ಕೊಟ್ಟ ಮೋದಿ ಅವರು ಎಲ್ಲ ಸಂಕಲ್ಪಗಳನ್ನು ಈಡೇರಿಸಿದ್ದಾರೆ. ಆದರೆ, ಈ ರಾಜ್ಯ ಸರ್ಕಾರ ಜನೌಷಧಿ ಕೇಂದ್ರಗಳನ್ನು ಮುಚ್ಚುವ ಕೆಲಸ ಮಾಡುತ್ತಿದೆ. ರಾಜ್ಯ ಸರ್ಕಾರ ರೈತರ ಸಹಾಯ ಧನ ನಿಲ್ಲಿಸಿದೆ ಎಂದ ಆಕ್ರೋಶ ವ್ಯಕ್ತಪಡಿಸಿದ ಅವರು, ಕಾಂಗ್ರೆಸ್ ದುರಾಡಳಿತದಕುರಿತುನಮ್ಮ ಕಾರ್ಯಕರ್ತರು ಜನರಿಗೆ ತಿಳಿಸಬೇಕು ಎಂದರು.ನರೇಂದ್ರ ಮೋದಿ ಅವರು ಆಯುಷ್ಠಾನ ಭಾರತ ಕಾರ್ಡ್ ಯೋಜನೆ, ಹೆದ್ದಾರಿ ಅಭಿವೃದ್ಧಿ, ರೈಲ್ವೆ ಅಭಿವೃದ್ಧಿ, ಸ್ವಚ್ಛ ಭಾರತ ಯೋಜನೆ ಸೇರಿದಂತೆ ಅನೇಕ ಯೋಜನೆ ಜಾರಿಗೊಳಿಸಿ ಭಾರತವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದಾರೆ ಎಂದು ತಿಳಿಸಿದರು.ಬಿಜೆಪಿ ಅಧ್ಯಕ್ಷ ಮಹಾಂತೇಶ ಬಾದಾಮಿ ಮಾತನಾಡಿ, 11 ವರ್ಷಗಳ ಮೋದಿ ಆಡಳಿತ ಸೈನಿಕರಿಗೆ ಭದ್ರತೆ, ರೈತರ ಕಲ್ಯಾಣ, ಬಡವರ ಕಲ್ಯಾಣ, ಸುರಕ್ಷಿತ-ಸುಭದ್ರತೆ ಆಡಳಿತ ಕೊಟ್ಟಿದೆ ಎಂದರು.

ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಉಮೇಶ ಯಾಧವ, ಸೋಮನಾಥ ಕುಲಕರ್ಣಿ, ಜಿಪಂ ಮಾಜಿ ಸದಸ್ಯ ಕೆ. ಮಹೇಶ ಮಾತನಾಡಿದರು, ಈ ವೇಳೆ ಪ್ರಮುಖರಾದ ಶೈಲಜಾ ಬಾಗಲಿ, ಶಿವುಕುಮಾರ ಹರಿಕೆರಿ, ಮಲ್ಲಣ್ಣ ಪಲ್ಲೇದ, ಜಯತೀರ್ಥ, ಅಶೋಕ ಬಳೂಟಗಿ, ಜಗ್ಗನಗೌಡ್ರು, ಬಾಲಪ್ಪ ಚಾಕ್ರಿ, ಶಿವನಗೌಡ ಮಾಲಗಿತ್ತಿ, ಆಲಂಪಾಷಾ ಮೋದಿ, ಮಹಾಂತೇಶ ಕಲಬಾವಿ ಸೇರಿದಂತೆ ಅನೇಕರು ಇದ್ದರು.
ವರದಿ ಲಕ್ಷ್ಮಣ್ ನವಲಹಳ್ಳಿ* *ಕೊಪ್ಪಳ*