
ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನಲ್ಲಿ ನಗರದ ಗುರುವಾರರಂದು ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಮೃತ್ಯುಂಜಯ ರಕ್ತದಾನಿಗಳ ಬಳಗದ ವತಿಯಿಂದ ಸಸಿಗಳನ್ನು ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಯವಿವೇಕಾನಂದ ಶಾಲೆ,ರಾಣಿ ಚೆನ್ನಮ್ಮ ಪ್ರಾಥಮಿಕ ಶಾಲೆ,KSPL ಕಾಲೇಜು ಶಿಕ್ಷಕರಿಗೆ,ಗ್ರಾಮೀಣ ಪೊಲೀಸ್ ಠಾಣೆ ಅಧಿಕಾರಿಗೆ,ನಗರ ಪೊಲೀಸ್ ಠಾಣೆ ಅಧಿಕಾರಿಗೆ ಸಸಿ ನೀಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಗಿಡ ಬೆಳೆಸಿ ನಾಡು ಉಳಿಸಿ ಎಂದು ಆಚರಣೆ ಮಾಡಲಾಯಿತು.ಮೃತ್ಯುಂಜಯ ರಕ್ತದಾನಿ ಬಳಗದ ಮುಖಂಡರು ಕೆ.ಎ.ಪವನ್ ಕುಮಾರ್( SFI ), ಕೌಶಿಕ್ ವಾಲ್ಮೀಕಿ, ರಮೇಶ, ವಿತೇಶ್, ನರೇಶ, ವಸಂತ್ ಕುಮಾರ್, ನದೀಮ್, ಹಾಗೂ ಮೃತ್ಯುಂಜಯ ರಕ್ತದಾನಿಗಳ ಬಳಗದ ಮುಖಂಡರುಗಳು ಉಪಸ್ಥಿತರಿದ್ದರು.