
ಕೊಟ್ಟಿಗಿನಹಾಳ ಗ್ರಾಮಕ್ಕೆ ಶಾಸಕ ಪತ್ರ ಗುರುದತ್ ಭೇಟಿ
ವಿಜಯನಗರ : ಹೊಸಪೇಟೆ ತಾಲೂಕಿನ ಗಾದಿಗನೂರು ಗ್ರಾಮ ಪಂಚಾಯತಿಯಲ್ಲಿ ಕ್ಷೇತ್ರದ ಶಾಸಕರ ಪುತ್ರರಾದ ಸಮಾಜ ಸೇವಕರಾದ ಹೆಚ್. ಜಿ. ಗುರುದತ್ತ ರವರು ಶುಕ್ರವಾರದಂದು ಅದೇ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆನಾಳ್ ಗ್ರಾಮಕೆ ಆಗಮಿಸಿ ಅಲ್ಲಿ ಕುಂದು ಕೊರತೆಗಳನ್ನು ಮುಖಂಡರ ಜೊತೆ ಚರ್ಚಿಸಿ ಹಾಗೆ ಅಲ್ಲಿನ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಆಹಾರ ಸಾಮಗ್ರಿಗಳು ಪರೀಕ್ಷಿಸಿದರು.
ಹಾಗೂ ಅಲ್ಲಿನ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ತೊಂದರೆಗಳನ್ನು ಶೀಘ್ರದಲ್ಲೇ ಪರಿಹರಿಸಬೇಕೆಂದು ಅಧಿಕಾರಿಗಳಿಗೆ ಹೇಳಿದರು ಈ ಸಂದರ್ಭದಲ್ಲಿ ಊರಿನ ಎಲ್ಲಾ ಕಾರ್ಯಕರ್ತರು ಹಿರಿಯ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
