
ಶಿಡ್ಲಘಟ್ಟ :
ಪ್ರಕೃತಿ ವಿಕೋಪಗಳಿಂದ ಹವಾಮಾನ ಏರುಪೇರು ಪರಿಸ್ಥಿತಿಯಲ್ಲಿ ಬೆಳೆ ಹಾಳಾಗುವುದರಿಂದ ಆಗುವ ನಷ್ಟದಿಂದ ಪಾರಾಗಲು ರೈತರು ಮರಯದೆ ಬೆಳೆ ವಿಮೆ ಮಾಡಿಸಬೇಕು ಈ ಬಗ್ಗೆ ರೈತರಲ್ಲಿ ಕೃಷಿ ಅಧಿಕಾರಿಗಳು ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಶಾಸಕರಾದ ಬಿ.ಎನ್.ರವಿಕುಮಾರ್ ಸೂಚಿಸಿದರು.ತಾಲ್ಲೂಕಿನ ವರದನಾಯಕನಹಳ್ಳಿ ಬಳಿಯ ಕೃಷಿ ಇಲಾಖೆಯ ನೂತನ ಕಚೇರಿ ಸಭಾಂಗಣದಲ್ಲಿ ನಡೆದ ಬಿತ್ತನೆ ಬೀಜ, ಕೃಷಿ ಪರಿಕರಗಳ ವಿತರಣೆ ಹಾಗೂ ತಜ್ಞರೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ತೊಗರಿ ಸೇರಿದಂತೆ ಕೆಲವು ಬೆಳೆಗಳನ್ನು ಈಗಾಗಲೇ ಬಿತ್ತನೆ ಮಾಡಲಾಗಿದೆ ಬಿತ್ತನೆ ಅವಧಿ ಮುಗಿದಿದ್ದು, ಇದೀಗ ಇಲಾಖೆಯಿಂದ ಬಿತ್ತನೆಯ ತೊಗರಿ ಇನ್ನಿತರೆ ಬೀಜ ವಿತರಿಸಲಾಗುತ್ತಿದ್ದು, ಇದರಿಂದ ಏನು ಉಪಯೋಗ ಎಂದು ಬೇಸರ ವ್ಯಕ್ತಪಡಿಸಿದರು ಇಲಾಖೆಯಿಂದ ರೈತರಿಗೆ ಸಾಕಷ್ಟು ಯೋಜನೆಗಳು ಇವೆ ಆದರೆ ಅವುಗಳ ಬಗ್ಗೆ ಅರಿವು ಮೂಡಿಸುವ, ಸಕಾಲಕ್ಕೆ ನೀಡುವ, ಅರ್ಹರನ್ನು ಸರಿಯಾಗಿ ಗುರ್ತಿಸುವ ಕೆಲಸ ಆಗಬೇಕು ಎಂದು ಹೇಳಿದರು.ಮಳೆ ಆಶ್ರಯದಲ್ಲಿ ರಾಗಿ, ನೆಲಗಡಲೆ ಮತ್ತು ಜೋಳವನ್ನು ಪ್ರಧಾನವಾಗಿ ಬೆಳೆಯುವ ಈ ಭಾಗದಲ್ಲಿ ಆಗಸ್ಟ್ ಮೊದಲ ವಾರದಿಂದ ಕಡೆಯ ವಾರದವರೆಗೂ ಹೆಚ್ಚು ಪ್ರಮಾಣದಲ್ಲಿ ಬಿತ್ತನೆ ಕಾರ್ಯ ನಡೆಯಲಿದೆ ಜತೆಗೆ, ಈಗಾಗಲೇ ಬಿತ್ತನೆ ಮಾಡಿದ ಬೆಳೆಗಳು ನವೆಂಬರ್ನಲ್ಲಿ ಜಡಿ ಮಳೆಗೆ ಸಿಲುಕಿ ಹಾಳಾಗುವುದೇ ಹೆಚ್ಚು, ಜತೆಗೆ ಅನೇಕ ಕಾರಣಗಳಿಂದಲೂ ಬೆಳೆಗಳು ಹಾಳಾಗುವ ಕಾರಣ ರೈತರು ನಷ್ಟಕ್ಕೆ ತುತ್ತಾಗುವುದನ್ನು ತಪ್ಪಿಸಲು ಎಲ್ಲರೂ ಬೆಳೆ ವಿಮೆ ಮಾಡಿಸಬೇಕು ಆದರೆ ಬಹಳಷ್ಟು ರೈತರು ಬೆಳೆ ವಿಮೆಯ ಮಹತ್ವ ತಿಳಿಯದೆ, ಬೆಳೆ ವಿಮೆ ಮಾಡಿಸುತ್ತಿಲ್ಲ ಅಂತಹ ಎಲ್ಲಾ ರಿಗೂ ಅರಿವು ಮೂಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ವಿಮೆ ಮಾಡಿಸುವಂತಾಗಬೇಕು ಎಂದು ಮನವಿ ಮಾಡಿದರು.
ಬಾಕ್ಸ್ : ಸಮಾರಂಭದ ಅವ್ಯವಸ್ಥೆಗೆ ಶಾಸಕರು ತರಾಟೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ, ಟಾರ್ಪಲ್ ಇನ್ನಿತರೆ ಪರಿಕರಗಳ ವಿತರಣೆ ಕಾರ್ಯಕ್ರಮಕ್ಕೆ ತಾಲ್ಲೂಕಿನ ನಾನಾ ಕಡೆಯಿಂದ ನೂರಾರು ರೈತರು ಆಗಮಿಸಿದ್ದರು, ಆದರೆ ಕೃಷಿ ಇಲಾಖೆ ಸಭಾಂಗಣದಲ್ಲಿ ಜಾಗದ ಕೊರತೆಯಿಂದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅನೇಕ ರೈತರು ಸಭಾಂಗಣದ ಹೊರಗಡೆ ನಿಂತಿದ್ದರು ಒಳಗೆ ಇದ್ದ ಅನೇಕ ರೈತರಿಗೂ ಕೂರಲು ಖುರ್ಚಿ ಇರಲಿಲ್ಲ ಜತೆಗೆ, ಕಾರ್ಯಕ್ರಮ ಮುಗಿಯುವಷ್ಟರಲ್ಲಿ ಮಧ್ಯಾಹ್ನವಾಗಿದ್ದು ಊಟದ ವ್ಯವಸ್ಥೆ ಮಾಡದಿದ್ದಕ್ಕೆ ಶಾಸಕ ಬಿ.ಎನ್. ರವಿಕುಮಾರ್ ಅವರು ಕಾರ್ಯಕ್ರಮ ಆಯೋಜಕ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು
.ವಯಸ್ಸಾದ ಬಿಪಿ ಶುಗರ್ ಇರುವ ಅನೇಕ ರೈತರಿದ್ದು ಅವರಿಗೆ ಸೂಕ್ತ ವ್ಯವಸ್ಥೆ ಮಾಡಬೇಕಿತ್ತು ಮುಂದಿನ ಸಲ ಪೆಂಡಾಲ್ ಹಾಕಿ ಖುರ್ಚಿ ವ್ಯವಸ್ಥೆ ಮಾಡಿ ಊಟದ ವ್ಯವಸ್ಥೆ ಮಾಡಿ ನಿಮ್ಮಿಂದ ಆಗದಿದ್ದಲ್ಲಿ ನನಗೆ ಹೇಳಿ ನಾನು ಮಾಡುತ್ತೇನೆ ವಯಸ್ಸಾದ ರೈತರು ನಿಲ್ಲುವುದು, ಹಸಿದ ಹೊಟ್ಟೆಯಲ್ಲಿ ಹೋಗುವುದು ಬೇಡ ಎಂದು ಬೇಸರ ವ್ಯಕ್ತಪಡಿಸಿದರು.

ಈ ವೇಳೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜದ ಕಿಟ್, ಟಾರ್ಪಲ್, ಮೇವು ಕತ್ತರಿಸುವ ಯಂತ್ರ, ಮಿನಿ ಟಿಲ್ಲರ್ ಮತ್ತಿತರರ ಪರಿಕರಗಳನ್ನು ಅರ್ಹ ರೈತರಿಗೆ ವಿತರಿಸಲಾಯಿತು.ಈ ಸಂದರ್ಭದಲ್ಲಿ ಕೃಷಿ ಉಪನಿರ್ದೇಶಕಿ ಭವ್ಯಾರಾಣಿ, ಕೃಷಿಸಹಾಯಕ ನಿರ್ದೇಶಕ ರವಿ, ಕೃಷಿಕ ಸಮಾಜದ ಉಪಾಧ್ಯಕ್ಷ ಪಾಪಣ್ಣ,ಕೆಂಪೇಗೌಡ, ನಾಗಮಂಗಲ ಶ್ರೀನಿವಾಸಗೌಡ, ಡಿ.ಎಸ್.ಎನ್.ರಾಜು,ಭಕ್ತರಹಳ್ಳಿ ವೆಂಕಟೇಶ್,ಮಂಜುನಾಥ್, ಇಲಾಖೆಯ ತಜ್ಞ ತನ್ವೀರ್,ಸುನೀಲ್ ಸುದರ್ಶನ್,ಮುಖಂಡ ತಾದೂರುರಘು, ರೈತ ಸಂಘಟನೆಗಳ ಮುಖಂಡರು ಮತ್ತು ರೈತರಬಾಂದವರು ಹಾಜರಿದ್ದರು.