,ಕೆಮ್ಮು ದಮ್ಮು ಅಸ್ತಮಾಕ್ಕೆ ಉಚಿತ ಔಷಧಿ* ಗಜೇಂದ್ರಗಡ
:ನಗರದ ಐತಿಹಾಸಿಕ ಪ್ರಸಿದ್ಧಿ ಪಡೆದಿರುವ ಭಾವೈಕ್ಯತೆಯ ಪೀಠ ತೆಕ್ಕೇದ ಭಾವಾನವರ ದರ್ಗಾದ ಸನ್ನಿಧಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ದಿ. 8 ರವಿವಾರ, ಕೆಮ್ಮು ದಮ್ಮು ಆಸ್ತಮಾ ಅಲರ್ಜಿದಿಂದ ಬಳಲುವವರಿಗೆ ದರ್ಗಾದ ಪೀಠಾಧಿಪತಿ ಹಜರತ್ ಸಯ್ಯದ್ ನಿಜಾಮುದ್ದೀನ್ ಶಾ ಪೀರಾ ತೆಕ್ಕೆದ ಭಾವನವರು, ಮೃಗಶಿರ ಮಳೆ ಪ್ರವೇಶ ಸಮಯ ಮಧ್ಯಾಹ್ನ 1:23ಕ್ಕೆ ಉಚಿತ ಔಷಧಿ ವಿತರಿಸುವರು. ಪೂಜ್ಯ ಶ್ರೀ. ಮ. ನಿ. ಪ. ಜಗದ್ಗುರು ವಿಜಯ ಮಹಾಂತ ಮಹಾಸ್ವಾಮಿಗಳು ಸಾನಿಧ್ಯವಹಿಸುವರು, ಸನ್ಮಾನ್ಯ ಶ್ರೀ ಜಿ. ಎಸ್. ಪಾಟೀಲ್, ಶಾಸಕರು ರೋಣ ಹಾಗೂ ಅಧ್ಯಕ್ಷರು ಖನಿಜ ಅಭಿವೃದ್ಧಿ ನಿಗಮ ಬೆಂಗಳೂರು ಉದ್ಘಾಟನೆ ನೆರವೇರಿಸುವರು, ಮುಖ್ಯ ಅತಿಥಿಗಳಾಗಿ ಶಿವರಾಜ್ ಘೋರ್ಪಡೆ ಪುರಸಭೆ ಸದಸ್ಯರು, ಸಿದ್ದಪ್ಪ ಜಿ. ಬಂಡಿ ಅಧ್ಯಕ್ಷರು ವೀರಶೈವ ಲಿಂಗಾಯತ ಸಮಾಜ, ರಾಜು ಸಾಗ್ಲಿಕರ ಪುರಸಭೆ ಸದಸ್ಯರು, ಯು. ಆರ್. ಚನ್ನಮ್ಮನವರ ಪುರಸಭೆ ಸದಸ್ಯರು, ಶ್ರೀಧರ ಬಿದರಳ್ಳಿ ಸಮಾಜ ಸೇವಕರು, ಮುರ್ತುಜಾ ಡಾಲಾಯತ್ ಪುರಸಭೆ ಸದಸ್ಯರು, ರಫೀಕ್ ತೋರಗಲ್ ಅಧ್ಯಕ್ಷರು ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ಟ್ರಷ್ಟ, ಪ್ರಭು ಚವಡಿ ಮಾಜಿ ಸದಸ್ಯರು ಪುರಸಭೆ, ನೂರುಲ್ ಹಸನ್ ತಟಗಾರ ಅಧ್ಯಕ್ಷರು ಅಂಜುಮನ್ ಇಸ್ಲಾಂ ಕಮಿಟಿ, ಬಸವರಾಜ್ ಕೊಟಗಿ ಸಮಾಜ ಸೇವಕರು ಅತಿಥಿಗಳಾಗಿ ಭಾಗವಹಿಸುವರು

.ಪ್ರಯೋಜನ ಪಡೆಯ ಬಯಸುವವರು ಒಂದು ಗಂಟೆ ಮುಂಚಿತವಾಗಿಯೇ ಬರಬೇಕೆಂದು ಪುರ ಸಭೆ ಮಾಜಿ ಸದಸ್ಯ ಎಮ್. ಎಸ್. ಮಕಾನದಾರ (9019934185)ಪ್ರಕಟಣೆಯಲ್ಲಿ ಕೋರಿದ್ದಾರೆ.