
ಗಜೇಂದ್ರಗಡ: ಕೆಮ್ಮು ದಮ್ಮು ಆಸ್ತಮಾ ಅಲರ್ಜಿದಿಂದ ಬಳಲುವವರಿಗೆ ದರ್ಗಾದ ಪೀಠಾಧಿಪತಿ ಹಜರತ್ ಸಯ್ಯದ್ ನಿಜಾಮುದ್ದೀನ್ ಶಾ ಪೀರಾ ತೆಕ್ಕೆದ ಭಾವನವರು, ಮೃಗಶಿರ ಮಳೆ ಪ್ರವೇಶ ಸಮಯ ಮಧ್ಯಾಹ್ನ 1:23ಕ್ಕೆ ಉಚಿತ ಔಷಧಿ ವಿತರಿಸಿ ಮಾತನಾಡಿ, ಈ ಗುಳುಗಿ ಗಿಡ ಮೂಲಿಕೆ ದಿಂದ ತಯಾರಿ ಮಾಡಿದ್ದು, ಮಕ್ಕಳಿಂದ ಮುದಕರವರೆಗೆ ಸೇವೆಸಬಹುದು ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ, ಅಲರ್ಜಿ ಕಾರಕಗಳಾದ ಗಿನ್ನ, ಕುಂಬಳಕಾಯಿ, ಹುಳಿ ಹಣ್ಣುಗಳು, ಮಧ್ಯಾಪಾನ, ಧುಮಪಾನ ವರ್ಗಿಸಿದರೆ ಉತ್ತಮ ಎಂದರು.ಪೂಜ್ಯ ಶ್ರೀ. ಮ. ನಿ. ಪ. ಜಗದ್ಗುರು ವಿಜಯ ಮಹಾಂತ ಮಹಾಸ್ವಾಮಿಗಳು ಸಾನಿಧ್ಯವಹಿಸಿ ಆಶೀರ್ವಚನ

ನೀಡಿ, ಯೋಗ, ಪ್ರಾಣಯಾಮ, ಧ್ಯಾನ, ಉತ್ತಮ ಪುಸ್ತಕಗಳ ಓದು, ವಾತಾವರಣಕ್ಕೆ ತಕ್ಕಂತೆ ಜೀವನ ಶೈಲಿ ರೂಢಿಸಿಕೊಂಡು ರೋಗದಿಂದ ದೂರ ಇರಲು ಸಾಧ್ಯ ಎಂದರು.ಜಿ. ಎಸ್. ಪಾಟೀಲ್, ಶಾಸಕರು ರೋಣ ಹಾಗೂ ಅಧ್ಯಕ್ಷರು ಖನಿಜ ಅಭಿವೃದ್ಧಿ ನಿಗಮ ಬೆಂಗಳೂರು ಉದ್ಘಾಟನೆ ನೆರವೇರಿಸಿ, ಅಸ್ತಮಾ ಬಹುರೂಪಿ ಆಗಿದ್ದು ಎಲ್ಲ ವಯೋಮಾನದವರಿಗೆ ಬರಬಹುದು ಮುಂಜಾಗ್ರತೆ ವಹಿಸಿ, ಧೂಳು, ಧೂಳಿನ ಕಣ, ತಂಬಾಕು ಜಿಗಿಯುವುದರಿಂದ ದೂರ ಇದ್ಫು, ಮಾನಸಿಕ ಒತ್ತಡ ಕಡಿಮೆ ಮಾಡಿಕೊಂಡು ಸ್ವಸ್ಥ ಜೀವನಸಾಗಿಸಬೇಕು, ಪರಿಸರ ಸಂರಕ್ಷಣೆ ಎಲ್ಲರ ಹೊಣೆ ಆಗಲಿ ಕೆಮ್ಮು ದಮ್ಮು ಬಾರದಂತೆ ಜಾಗ್ರತೆ ಇರಲಿ ಎಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಶಿವರಾಜ್ ಘೋರ್ಪಡೆ ಪುರಸಭೆ ಸದಸ್ಯರು, ಸಿದ್ದಪ್ಪ ಜಿ. ಬಂಡಿ ಅಧ್ಯಕ್ಷರು ವೀರಶೈವ ಲಿಂಗಾಯತ ಸಮಾಜ, ರಾಜು ಸಾಗ್ಲಿಕರ ಪುರಸಭೆ ಸದಸ್ಯರು, ಶ್ರೀಧರ ಬಿದರಳ್ಳಿ ಸಮಾಜ ಸೇವಕರು, ಮುರ್ತುಜಾ ಡಾಲಾಯತ್ ಪುರಸಭೆ ಸದಸ್ಯರು, ರಫೀಕ್ ತೋರಗಲ್ ಅಧ್ಯಕ್ಷರು ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ಟ್ರಷ್ಟ, ಪ್ರಭು ಚವಡಿ ಮಾಜಿ ಸದಸ್ಯರು ಪುರಸಭೆ, ನೂರುಲ್ ಹಸನ್ ತಟಗಾರ ಅಧ್ಯಕ್ಷರು ಅಂಜುಮನ್ ಇಸ್ಲಾಂ ಕಮಿಟಿ, ಬಸವರಾಜ್ ಕೊಟಗಿ, ಮುಖಂಡ ಚಂಬಣ್ಣ ಚವಡಿ, ಎಮ್. ಎಸ್. ಮಕಾನದಾರ, ಎ. ಡಿ. ಕೋಲಕಾರ, ಎಮ್. ಐ. ಮದಗಾರ ಮುಂತಾದವರು ವೇದಿಕೆಯಲ್ಲಿ ಇದ್ದರು.

ಕೊಪ್ಪಳ ಬಾಗಲಕೋಟ ವಿಜಯಪುರ ಜಿಲ್ಲೆಯ ಸಾವಿರಾರು ಜನ ಪ್ರಯೋಜನ ಪಡೆದರು.