*ಬಾಬಾಸಾಹೇಬ್ ಡಾ//ಬಿ.ಆರ್ ಅಂಬೇಡ್ಕರ್ ಅವರ ಹೆಸರನ್ನು ವಿಜಯಪುರ ರೈಲ್ವೆ ನಿಲ್ದಾಣಕ್ಕೆ ನಾಮಕರಣಕ್ಕೆ ಮನವಿ

* *ಇಂಡಿ*. ಡಾ. ಬಿ ಆರ್ .ಅಂಬೇಡ್ಕರರು ವಿಜಯಪುರ ನಗರಕ್ಕೆ ಭೇಟಿ ನೀಡಿ ತಮ್ಮ ಹೆಜ್ಜೆ ಗುರುತುಗಳನ್ನು ಬಿಟ್ಟುಹೋದ ಹಾಗೂ ಸಮಗ್ರ ಹರಿಜನರನ್ನು ಒಂದುಗೂಡಿಸಿ ವಿಜಯಪುರದ ರಾಣಿ ಬಗೀಚಿನಲ್ಲಿ ಹರಿಜನರ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ್ದು ಐತಿಹಾಸಿಕ ಹಾಗೂ ರೋಮಾಂಚನಕಾರಿ ಕ್ಷಣವಾಗಿದ್ದು, ಇದೇ ಸಂದರ್ಭದಲ್ಲಿ ಬೀಳಗಿಯ ಸೋಮನಗೌಡ ಫಕೀರ ಗೌಡ ಪಾಟೀಲ್ ಇವರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ನ್ಯಾಯಾಲಯದಲ್ಲಿ ಅವರ ಪರವಾಗಿ ವಾದ ಮಾಡಿ ಅವರಿಗೆ ಆಗಬೇಕಾಗಿದ್ದ ಗಲ್ಲು ಶಿಕ್ಷೆಯನ್ನು ತಪ್ಪಿಸಿದ್ದು ಅವರ ಕಾನೂನು ಪಾಂಡಿತ್ಯವನ್ನು ಪ್ರತಿಯೊಬ್ಬರು ಕೂಡ ಮೆಚ್ಚಲೇಬೇಕಾದ ವಿಷಯವಾಗಿದ್ದು, ಇಂತಹ ಹತ್ತು ಹಲವಾರು ಐತಿಹಾಸಿಕ ಕ್ಷಣಗಳಿಗೆ ವಿಜಯಪುರ ನಗರ ಸಾಕ್ಷಿಯಾಗಿದ್ದು ಇಂಥಹ ಐತಿಹಾಸಿಕ ಘಟನೆಗಳಿಂದ ತಳಸಮುದಾಯದ ಯುವಕರು ಪ್ರೇರೇಪಣೆಗೊಳ್ಳುವುದರಲ್ಲಿ ಸಂದೇಹವಿಲ್ಲ. ಈ ಎಲ್ಲಾ ಕಾರಣಗಳಿಂದ ಹಾಗೂ ಬಾಬಾ ಸಾಹೇಬರು ಬಂದು ಹೋದ ಹೆಜ್ಜೆಗಳ ಸವಿನೆನಪಿಗೋಸ್ಕರ ವಿಜಯಪುರ ರೈಲ್ವೆ ನಿಲ್ದಾಣಕ್ಕೆ ಮಹಾಮಾನತಾವಾದಿ, ಸಂವಿಧಾನ ಶಿಲ್ಪಿ ಡಾ / ಬಿ ಆರ್ ಅಂಬೇಡ್ಕರ್ ರ ಹೆಸರನ್ನು ನಾಮಕರಣ ಮಾಡಬೇಕೆಂದು ವಿಜಯಪುರ ಜಿಲ್ಲೆಯ ಭೀಮ್ ಸರಕಾರ ಸಂಘಟನೆಯ ಅಭಿಪ್ರಾಯವಾಗಿದೆ ಆದ್ದರಿಂದ ಮಾನ್ಯ ಸಚಿವರು ಈ ವಿಷಯವನ್ನು ಗಣನೆಗೆ ತೆಗೆದುಕೊಂಡು ಐತಿಹಾಸಿಕ ನಗರದ ರೇಲ್ವೆ ನಿಲ್ದಾಣಕ್ಕೆ ಡಾ| ಬಾಬಾಸಾಹೇಬರ ಅಂಬೇಡ್ಕರ ರೈಲು ನಿಲ್ದಾಣ ಎಂದು ನಾಮಕರಣ ಮಾಡಲು ಭೀಮ್ ಸರಕಾರ ತಾಲೂಕು ಅಧ್ಯಕ್ಷ ಆನಂದ ಅಗರಖೇಡ ಹಾಗೂ ಸಂಘಟನೆಯ ಮೂಲಕ ಇವತ್ತು ಇಂಡಿ ತಾಲೂಕು ಉಪವಿಭಾಗಧಿಕಾರಿಗಳಾದ ಅನುರಾಧ ವಸ್ತ್ರದ್ ರವರಿಗೆ ಭೀಮ್ ಸರಕಾರ ಸಂಘಟನೆ ವತಿಯಿಂದ ಮನವಿ ಸಲ್ಲಿಸಲಾಯಿತು,

ಈ ಸಂದರ್ಭದಲ್ಲಿ ಭೀಮ್ ಸರಕಾರ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾದ ಅಶೋಕ್ ನಾಯ್ಕೋಡಿ, ತಾಲೂಕು ಸಂಚಾಲಕರಾದ ರಾಹುಲ್ ಮನಗೂಳಿ, ಅರವಿಂದ್ ಕಾಂಬಳೆ, ಮಹೇಶ್ ಶಿವಶರಣ, ಮೇಘರಾಜ್ ವಾಲಿಕಾರ್, ಶಿವಾನಂದ ಹರಿಜನ್, ಸೋಮು ಹಳ್ಳಿ, ಆಕಾಶ್ ಕಾಂಬಳೆ, ತುಕಾರಾಂ ಪವರ್, ಉದಯ್ ಪವರ್ ಉಪಸ್ಥಿತರಿದ್ದರು