12 ವರ್ಷದ ನಂತರ ಮೊದಲ ಬಾರಿ ಗ್ರಾಮದಲ್ಲಿ ಬಕ್ರೀದ್ ಹಬ್ಬದ ನಮಾಜ್.ಸಂತಸದಿಂದ ನುಡಿದ ಜನತೆ

12 ವರ್ಷದ ನಂತರ ಮೊದಲ ಬಾರಿ ಗ್ರಾಮದಲ್ಲಿ ಬಕ್ರೀದ್ ಹಬ್ಬದ ನಮಾಜ್.ಸಂತಸದಿಂದ ನುಡಿದ ಜನತೆ

“ಕೊಪ್ಪಳ ಜಿಲ್ಲೆ, ಗಂಗಾವತಿ ತಾಲೂಕಿನ ಜಬ್ಬಲಗುಡ್ಡ ಗ್ರಾಮದಲ್ಲಿ 12 ವರ್ಷದ ನಂತರ ಮೊದಲ ಬಾರಿ ಬಕ್ರೀದ್ ಹಬ್ಬದ ಅಂಗವಾಗಿ ಜಾಮಿಯ ಮಸೀದಿನಲ್ಲಿ ನಮಾಜ್ ಮಾಡಲಾಯಿತು. ಇದು ಅತ್ಯಂತ ಹರ್ಷದ ವಿಷಯವಾಗಿದೆ!12 ವರ್ಷದ ನಂತರ ತಮ್ಮ ಗ್ರಾಮದ ಜನರು ಬಕ್ರೀದ್ ಹಬ್ಬವನ್ನು ಜಬ್ಬಲಗುಡ್ಡ ಗ್ರಾಮದ ಜಾಮಿಯಾ ಮಸೀದಿನಲ್ಲಿ (ಈದ್-ಉಲ್-ಅಧಾ) ಹಬ್ಬದ ಅಂಗವಾಗಿ ನಮಾಜ್ ಸಲ್ಲಿಸಿದ್ದಾರೆ.ಗಂಗಾವತಿ ತಾಲೂಕಿನ ಜಬ್ಬಲಗುಡ್ಡ ಗ್ರಾಮದ ಜಾಮಿಯಾ ಮಸೀದಿ 2012ರಲ್ಲಿ ನಿರ್ಮಾಣವಾಯಿತು, ಆದರೆ ಅಲ್ಲಿಂದ ಇಲ್ಲಿಯವರೆಗೂ ಯಾವುದೇ ಪ್ರಾರ್ಥನೆ ನಮಾಜ್ ಕೂಡ ಮಾಡರಲಿಲ್ಲ ಪ್ರತಿ ವರ್ಷ ಹಬ್ಬದ ಸಂದರ್ಭದಲ್ಲಿ ಬೇರೆ ಗ್ರಾಮದ ಈದ್ಗಾ ಅಥವಾ ಮಸೀದಿಗೆ ತೆರಳಿ ನಮಾಜ್ ಮಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಆದರೆ ಈ ಬಾರಿ ಜಬಲಗುಡ್ಡ ಗ್ರಾಮದ ಜಾಮಿಯಾ ಮಸೀದಿ ಕಮಿಟಿಯ ಮುಖಂಡ ಕರೀಂ ಸಾಬ್ ಜಬ್ಬಲಗುಡ್ಡ, ಮತ್ತು ಮುಕ್ಕುಂಪಿ ನೌಜವಾನ್ ಕಮಿಟಿಯ ಯುವಕರು ವಲಿ, ಹಾಗೂ ಅಬೂಬಕರ್ ಸಾಹೇಬ್, ಸೇರಿ ಜವಾಬ್ದಾರಿ ಹೊತ್ತು ನಿರ್ಧಾರ ಕೈಗೊಂಡರು. ಈ ವರ್ಷ ಬಕ್ರೀದ್ ಹಬ್ಬದ ದಿನದಂದು ನಮ್ಮ ಗ್ರಾಮದಲ್ಲೆ ನಮಾಜ್ ಮಾಡುವಂತ ವ್ಯವಸ್ಥೆ ಕಲ್ಪಿಸಿ ಕೊಡೋಣ ಎಂದು ಜಬ್ಬಲಗುಡ್ಡ ಗ್ರಾಮದವರು ಸೇರಿ ಇವರ ಜೊತೆ ನಿರ್ಧಾರ ಕೈಗೊಂಡರು. ಅದರಂತೆ ಈ ವರ್ಷ ಬಕ್ರಿದ್ ಹಬ್ಬ ದಿನದಂದು ತಮ್ಮ ಸ್ವಗ್ರಾಮದ ಮಸೀದಿಯಲ್ಲಿ ಸಡಗರ ಸಂಭ್ರಮದಿಂದ ಮುಸ್ಲಿಂ ಸಮುದಾಯದವರು ಪಾದಯಾತ್ರೆಯ ಮೂಲಕ ತಮ್ಮ ಗ್ರಾಮದಲ್ಲಿರುವ ಜಾಮೀಯ ಮಸೀದಿಗೆ ತೆರಳಿದರು ಬಕ್ರೀದ್ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ನಮಾಜ್ ನಲ್ಲಿ ಮುಸ್ಲಿಂ ಸಮುದಾಯದ ಗುರುಗಳಾದ ಖತಿಬೊ-ಇಮಾಮ್ ಹಜರತ್ ಮೌಲಾನ ಖಾಜಿ ಜಮಿಲ್ ಅಶ್ರಫಿ ಸಾಹೇಬ್ ಅವರ ನೇತೃತ್ವದಲ್ಲಿ ಶ್ರದ್ಧಾ ಭಕ್ತಿಯಿಂದ ನಮಾಜ್ ಮಾಡಲಾಯಿತು.

ನಂತರ ಗ್ರಾಮದ ಶಾಂತಿ ಮತ್ತು ಒಳಿತಿಗಾಗಿ ಗುರುಗಳು ಪ್ರಾರ್ಥನೆ ಸಲ್ಲಿಸಿದರು.ಇದು ಸಾಂಪ್ರದಾಯಿಕ, ಧಾರ್ಮಿಕ ಮತ್ತು ಸಾಮಾಜಿಕ ಏಕತೆಯ ಒಂದು ಶಕ್ತಿಶಾಲಿ ಸಂಕೇತವಾಗಿದೆ.ಗ್ರಾಮದಲ್ಲಿ ಕಳೆದ 13 ವರ್ಷಗಳಿಂದ ನಿಲ್ಲಿಸಲಾಗಿದ್ದ ಬಕ್ರೀದ್ ನಮಾಜ್ ಈ ಬಾರಿ ವಿಶೇಷವಾಗಿ ನಡೆದಿದ್ದು, ಸ್ಥಳೀಯ ಜನತೆಗೆ ಉತ್ಸಾಹಕ್ಕೆ ಕಾರಣವಾಗಿದೆ

.ಧಾರ್ಮಿಕ ಭಾವನೆಗಳೊಂದಿಗೆ ಶಾಂತಿ ಮತ್ತು ಬಾಂಧವ್ಯವನ್ನೂ ಒಡೆಯದಂತೆ ಆಚರಿಸಲಾದ ಈ ಹಬ್ಬ, ಗ್ರಾಮದಲ್ಲಿ ಹೊಸ ನಿರೀಕ್ಷೆಗೂ ಜಾಗ ಕೊಡಿದೆ. ಹಿರಿಯರು, ಮಕ್ಕಳು, ಮಹಿಳೆಯರು ಸೇರಿದಂತೆ ಎಲ್ಲಾ ವರ್ಗದ ಜನರು ಭಾಗವಹಿಸಿ, ಇದನ್ನು ಆಚರಣೆಯ ಹಬ್ಬವಾಗಿ ಪರಿವರ್ತಿಸಿದರು.

Leave a Reply

Your email address will not be published. Required fields are marked *