
*ಗಂಗಾವತಿ* : 09ನಗರದ 4ನೇ ವಾರ್ಡನ ನೀಲಾ ಬೇಕರಿ ಹಿಂದೆ ಇರುವ ಸವಿತಾ ಸಮಾಜ ಓಣಿಯಲ್ಲಿ ಎರಡು ವಿದ್ಯುತ್ ಕಂಬಗಳು ಬೀಳುವ ಹಂತ ತಲುಪಿದ್ದು ನಾಗರಿಕರು ಜೀವ ಭಯದಲ್ಲಿ ವಾಸಿಸುವಂತಾಗಿದೆ.ಈ ಕಂಬಗಳು ದುರಸ್ಥಿ ಅವಸ್ಥೆಯಲ್ಲಿದ್ದರು ಕೆಇಬಿಯವರು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.

ಈ ವಾರ್ಡನಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದು ಮಕ್ಕಳು ಅಲ್ಲೇ ಆಟವಾಡುವದರಿಂದ ಒಂದು ವೇಳೆ ಕಂಬಗಳು ಬಿದ್ದರೇ ಅಲ್ಲಿಯ ಮಕ್ಕಳ ನಾಗರಿಕರ ಪ್ರಾಣ ಹಾನಿ ಆಗುವ ಸಂಭವವಿದೆ ಎಂದು ವಾರ್ಡ್ ನ ನಿವಾಸಿಗಳು ತಮ್ಮ ಅಳನ್ನು ತೋಡಿಕೊಂಡಿದ್ದಾರೆ.ಒಂದು ವೇಳೆ ಕಂಬಗಳು ಬಿದ್ದು ಯಾವುದೇ ಅವಘಡ ಸಂಭವಿಸಿದಲ್ಲಿ ಅದಕ್ಕೆ ಇಲಾಖೆಯೇ ಹೊಣೆಗಾರರಾಗುತ್ತಾರೆ ಎಂದು ತಿಳಿಸಿದರು.ಕೂಡಲೇ ಎರಡು ವಿದ್ಯುತ್ ಕಂಬಗಳನ್ನು ಪರಿಶೀಲಿಸಿ ಅವುಗಳನ್ನು ಬದಲಿಸಿ ಬೇರೆ ಕಂಬಗಳನ್ನು ಅಳವಡಿಸಿ ಆಗುವ ಅನಾಹುತಗಳನ್ನು ತಪ್ಪಿಸಲು ಮುಂದಾಗಬೇಕು ಎಂದು ವಾರ್ಡನ ನಿವಾಸಿಗಳು ಆಗ್ರಹಿಸಿದ್ದಾರೆ.ಈ ಸಂದರ್ಭದಲ್ಲಿ ಅಶ್ವಿನಿ, ಲಕ್ಷ್ಮೀ,ಮುನಿಯಮ್ಮ,ಹೇಮಾವತಿ, ನಂದಿತಾ,ಗೀತಾ,ನಾಗವೀಣಿ,ಸಜಾತ,ಸೇರಿದಂತೆ ಇತರರು ಇದ್ದರು.